ಬೆಂಗಳೂರು: ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಬಂಧಿಸುವಲ್ಲಿ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನವೀನ್ ಬಿನ್ ಅಯ್ಯಸ್ವಾಮಿ, ಪ್ರಕಾಶ ಬಿನ್ ರಾಮಸ್ವಾಮಿ, ಖಾದರ್ ಬಾಷಾ, ಜಾವೀದ್, ಶಬರೀನಾಥನ್ ಹಾಗೂ ಸತೀಶ್ ಕುಮಾರ್ ಎಂಬುವರುಗಳನ್ನು ದಸ್ತಗಿರಿ ಮಾಡಿ ಆನೆ ದಂತಗಳ ಒಟ್ಟು 12 ಪೀಸುಗಳನ್ನು ವಶಪಡಿಸಿಕೊಂಡಿರುತ್ತಾರೆ.